Posts

*ನಾನು ಎನ್ನುವ ಅಹಂ: ವ್ಯಕ್ತಿತ್ವ ವಿಕಸನಕ್ಕೆ ಮಾರಕ*

ಮಾನವನ ಜೀವನದಲ್ಲಿ ವ್ಯಕ್ತಿತ್ವ ವಿಕಸನವು ನಿರಂತರ ಪ್ರಕ್ರಿಯೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ನಾವು ಕಲಿಯುತ್ತಾ, ಬೆಳೆಯುತ್ತಾ, ನಮ್ಮನ್ನು ನಾವು ರೂಪಿಸಿಕೊಳ್ಳುತ್ತಾ ಹೋಗುತ್ತೇವೆ. ಆದರೆ, ಈ ವಿಕಸನಕ್ಕೆ ಅತಿ ದೊಡ್ಡ ಅಡ್ಡಿಯಾಗಿ ನಿಲ್ಲುವುದು 'ನಾನು' ಎನ್ನುವ ಅಹಂ. ಅಹಂ ಎಂದರೆ ಕೇವಲ ದುರಹಂಕಾರವಲ್ಲ, ಬದಲಿಗೆ ತನ್ನ ಬಗ್ಗೆ ತಾನೇ ಇಟ್ಟುಕೊಂಡಿರುವ ಅತಿಯಾದ ಅಭಿಮಾನ, ತನ್ನನ್ನೇ ಕೇಂದ್ರವಾಗಿಟ್ಟುಕೊಂಡು ಯೋಚಿಸುವ ಪ್ರವೃತ್ತಿ. ಈ ಅಹಂಕಾರವು ನಮ್ಮನ್ನು ಸೀಮಿತಗೊಳಿಸುತ್ತದೆ. ಬೆಳೆಯದಂತೆ ಮಾಡುತ್ತದೆ. 'ನಾನು ಹೇಳಿದ್ದೇ ಸರಿ', 'ನನಗಿಂತ ಯಾರೂ ಉತ್ತಮರಲ್ಲ', 'ನನ್ನ ನಿರ್ಧಾರವೇ ಅಂತಿಮ' ಎಂಬ ಭಾವನೆಗಳು ನಮ್ಮನ್ನು ಹೊಸ ವಿಷಯಗಳನ್ನು ಕಲಿಯುವುದರಿಂದ, ಇತರರ ಅಭಿಪ್ರಾಯಗಳನ್ನು ಆಲಿಸುವುದರಿಂದ ಮತ್ತು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ದೂರವಿಡುತ್ತವೆ. ಇದು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಹಂ ಇರುವ ವ್ಯಕ್ತಿ ತಾನು ಎಲ್ಲವನ್ನೂ ಬಲ್ಲೆ ಎಂದು ಭಾವಿಸುತ್ತಾನೆ, ಇದರಿಂದ ಹೊಸ ಜ್ಞಾನವನ್ನು ಪಡೆಯಲು, ಹೊಸ ಕೌಶಲ್ಯಗಳನ್ನು ಕಲಿಯಲು ಆತ ಆಸಕ್ತಿ ತೋರಿಸುವುದಿಲ್ಲ. ಕಲಿಕೆ ನಿಂತಾಗ ವ್ಯಕ್ತಿತ್ವ ವಿಕಸನವೂ ನಿಲ್ಲುತ್ತದೆ. ಅಹಂಕಾರವು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ. 'ನಾನು' ಎಂಬ ಭಾವನೆ ಮೇಲುಗೈ ಸಾಧಿಸಿದಾಗ, ಇತರರ ಭಾವನೆಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಸಿಗುವುದಿಲ್...

ಹುಲಕುಂದ: ವಾರ್ಷಿಕ ಸ್ನೇಹ ಸಮ್ಮೇಳನ

Image
5ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ, ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ‌ ಸಂಘದ ಉದ್ಘಾಟನಾ ಕಾರ್ಯಕ್ರಮ ಹೀಗೆ ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಲಕುಂದ. "ಮನಸ್ಸಿದ್ದರೆ ಮಾರ್ಗ" ಎನ್ನುವ ಮಾತು ಇಲ್ಲಿ ಸಾಧ್ಯವಾಗಿತ್ತು, ಸಾಧ್ಯವಾಗಿಸಿದ್ದು ಶ್ರೀ ಎ ಕೆ ಮುಳ್ಳೂರ ಮುಖ್ಯ ಗುರುಗಳು, ಶ್ರೀಮತಿ ರಂಜನಾ ಬೂದಿ ಗುರುಮಾತೆಯರು, ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು. 20 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯ ಈ ಕಾರ್ಯಕ್ರಮದಲ್ಲಿ ದೊಡ್ಡ ಶಾಲೆಗಳಿಗೂ ಕಡಿಮೆ ಇಲ್ಲದ 20 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಅಭಿವೃದ್ದಿಯ ಸಂಕಲ್ಪದೊಂದಿಗೆ ಹಳೆಯ ವಿದ್ಯಾರ್ಥಿಗಳ‌ ಸಂಘದ ಉದ್ಘಾಟನೆ, ಗ್ರಾಮ ಪಂಚಾಯತಿ ಎಲ್ಲ ಸದಸ್ಯರನ್ನೂ ವೇದಿಕೆಗೆ ತರುವ ಪ್ರಯತ್ನ, ಅಕ್ಕಪಕ್ಕದ ಎಲ್ಲ ಶಾಲೆಗಳ ಶಿಕ್ಷಕರೂ ಈ ಕಾರ್ಯಕ್ರಮದಲ್ಲಿ ಇರುವಂತೆ ಮಾಡಿದ ಪ್ರೀತಿಯ ಆಮಂತ್ರಣ, ಶಾಲೆಯ ಶಿಕ್ಷಕರು ಶಾಲೆಯ ಅವಶ್ಯಕತೆಗಳ ಕುರಿತು ಮನವಿ ಮಾಡುವ ಮುನ್ನವೇ ವೇದಿಕೆ ಮೇಲಿದ್ದ ಗಣ್ಯರೆಲ್ಲ ಸ್ಪಂದಿಸಿದ್ದು, ಮಕ್ಕಳ ಕಾರ್ಯಕ್ರಮಗಳನ್ನು ಶಿಕ್ಷಕರೇ ಸಂಭ್ರಮಿಸಿದ್ದು ತಯಾರಿಯಲ್ಲಿ ಅವರ ಶ್ರಮವನ್ನು ತೋರಿಸುತಿತ್ತು. ಎಲ್ಲವೂ ಕುಳಿತಲ್ಲಿಯೇ ಸಿಗುವ ರೀತಿಯಲ್ಲಿ ಕ್ರಿಯಾಶೀಲ ಹಳೆಯ ವಿದ್ಯಾರ್ಥಿಗಳ ಓಡಾಟ, ಅವರ ಉತ್ಸಾಹದ...

ವಿಜ್ಞಾ‌ನ ವಸ್ತು ಪ್ರದರ್ಶನ

Image
*ಕುನ್ನಾಳ ಪಿಎಂಶ್ರೀ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ*  ರಾಮದುರ್ಗ: ತಾಲೂಕಿನ‌ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ‌ ದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ ಮಳಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ವಿವಿಧ ಶಾಲೆಗಳ 30 ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.   ಪ್ರಥಮ ಸ್ಥಾನವನ್ನು ಎಮ್.ಕೆ.ಬಿ.ಎಸ್ ಸಾಲಹಳ್ಳಿ, ದ್ವಿತೀಯ ಸ್ಥಾನವನ್ನು ಕೆ.ಹೆಚ್.ಪಿ.ಎಸ್ ಹಿರೇಕೊಪ್ಪ ಕೆ ಎಸ್, ತೃತೀಯ ಸ್ಥಾನವನ್ನು ಕೆ.ಹೆಚ್.ಪಿ.ಎಸ್ ಗುದಗೊಪ್ಪ ಹಾಗೂ ಚತುರ್ಥ ಸ್ಥಾನವನ್ನು ಎಮ್.ಪಿ.ಎಸ್ ಹುಲಕುಂದ ಶಾಲೆಯ ವಿದ್ಯಾರ್ಥಿಗಳು ಪಡೆಯುವ ಮೂಲಕ ಗಮನ ಸೆಳೆದರು. ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ವಿ ಡಿ ದಳವಾಯಿ, ಹಿರೇಕೊಪ್ಪ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಜೇವೂರ, ವಿ ಆರ್ ಅಣ್ಣಿಗೇರಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳದ ವಿದ್ಯಾರ್ಥಿಗಳು ಹಲವಾರು ಮಾದರಿಗಳ ಮೂಲಕ ಪ್ರದರ್ಶನದಲ್ಲಿ ಭಾಗವಹಿಸಿ ಮೆರಗು ಹೆಚ್ಚಿಸಿದರು. ಇತರ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶಸ್ತಿ ಸುತ್ತಿಗೆ ಪರಿಗಣಿ...

ಎಲ್ಲ ಮಕ್ಕಳ ಆಸಕ್ತಿಗಳು ಭಿನ್ನ

Image
ಎಲ್ಲ ಮಕ್ಕಳೂ ಅವಳಂತಿದ್ದರೆ/ಅವನಂತಿದ್ದರೆ.... ಇದು ಪ್ರತೀ ಶಿಕ್ಷಕರೂ ಆಡುವ ಮಾತು, ಆದರೆ ವಾಸ್ತವ ಹಾಗಿರಲೂ ಸಾಧ್ಯವೇ ಇಲ್ಲ. ಎಲ್ಲಾ ರೀತಿಯ ಪ್ರಯತ್ನಗಳ ನಂತರವೂ ಕೆಲವು ಮಕ್ಕಳು ನಮ್ಮ ನಿರೀಕ್ಷೆಗಳನ್ನು ಪೂರೈಸಿರುವುದಿಲ್ಲ. ಎಲ್ಲ ಮಕ್ಕಳ ಕುರಿತಾಗಿ ಒಂದೇ ರೀತಿಯ ನಿರೀಕ್ಷೆ ಇಡುವುದು ಕೂಡ ಸರಿಯಲ್ಲ ಎಂದು ಗೊತ್ತಿದ್ದರೂ ನಾವು ಮತ್ತೂ ಹಾಗೇ ಆಲೋಚಿಸುತ್ತೇವೆ. ಪಾಲಕರೂ ಕೂಡ. ತರಗತಿಯಲಿ ಸುಮ್ಮನೆ ಕೂಡುವ ಒಂದು ಮಗು, ಚಟುವಟಿಕೆ ಎಂದಾಕ್ಷಣ ಮುಖವನ್ನರಳಿಸಿ ಆಸಕ್ತಿಯಿಂದ ಭಾಗವಹಿಸಲು ಚಡಪಡಿಸುತ್ತಾನೆ. ಅದು ಅವನ ಆಸಕ್ತಿ, ಆಸಕ್ತಿಯುದ್ದರೆ ಮಕ್ಕಳೇನೆಲ್ಲವನ್ನು ಮಾಡಬಲ್ಲರು. ಅದಿಲ್ಲದಿದ್ದರೆ ಏನೂ ಸಾಧ್ಯವಿಲ್ಲ. ಭಿನ್ನ ಚಟುವಟಿಕೆಗಳ ಮೂಲಕ ಅವರವರ ಆಸಕ್ತಿಯನ್ನು ಅರಿತಾಗ ಮಾತ್ರ ಅವರ ಕಲಿಕೆಯನ್ನು ಫಲಪ್ರದವಾಗಿಸಲು ಸಾಧ್ಯ. ಎಲ್ಲ ಮಕ್ಕಳ ಆಸಕ್ತಿಗಳು ಒಂದೇ ಆಗಿರುವುದಿಲ್ಲ, ಹಾಗಾಗಿ ಒಂದೇ ರೀತಿಯ ಬೋಧನೆಯ ಸಾಕಾಗುವುದಿಲ್ಲ. ಇದೆಲ್ಲವನ್ನೂ ಅರಿಯದೇ ಹೋದರೆ ಯಶಸ್ಸು ಸಾಧ್ಯವೂ ಇಲ್ಲ. ಪ್ರತೀ ಶಿಕ್ಷಕನೂ ಏನೂ ನಿರೀಕ್ಷಿಸಿದೇ ತನ್ನ ಉತ್ಕೃಷ್ಟ ಪ್ರಯತ್ನವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾನೆ. ಒಂದು ಮಗು ವರ್ಷಾಂತ್ಯಕ್ಕೆ ಹೀಗೆಯೇ ಆಗಬೇಕು ಎಂದುಕೊಳ್ಳುವುದಕ್ಕಿಂತ, ಓರ್ವ ಶಿಕ್ಷಕನಾಗಿ ನಾನು ತರಗತಿಗಳಲ್ಲಿ ಈ ರೀತಿಯ ಎಲ್ಲ ಚಟುವಟಿಕೆಗಳನ್ನು ಮಾಡಬೇಕು ಎಂದು ಸಂಕಲ್ಪಿಸಿ ಸುಮ್ಮನೆ ಮಾಡಿದರೆ ಸಾಕು ಪಲಿತಾಂಶ ತಾನೇ ಪ್ರತಿಫಲಿಸಿರುತ...

ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ

Image
ಶಿಕ್ಷಕನಾಗಿ ಆರಂಭಿಕ ದಿನಗಳವು, ಮಕ್ಕಳಲ್ಲಿ ಆಂಗ್ಲ‌ ಭಾಷಾ ಕಲಿಕಾ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ  ವಿವಿಧ ಚಟುವಟಿಕೆಗಳು ಹಾಗೂ ಸ್ಪರ್ಧೆಗಳನ್ನು ತರಗತಿಗಳಲ್ಲಿ ಪರಿಚಯಿಸಿದೆ. Antonyms, Synonyms, Suffixes, Prefixes, Singular & Plural, Homophones, Homonyms, Parts of Speech ಹೀಗೆ ಎಲ್ಲವುಗಳೂ ಚಟುವಟಿಕೆಗಳಾಗಿ ಬದಲಾಗಿದ್ದವು. ರಿವರ್ಸ ನಂಬರ್ಸ, ಅಲ್ಪಾಬೆಟ್ಸ, ಯೂಸೇಜ್ ಆಪ್ ಮಲ್ಟಿ ಲಾಂಗ್ವೇಜ್ ಫಾರ್ ನಂಬರ್ಸ, ವರ್ಡ್ಸ ಅ್ಯಂಡ್ ಇಟಿಸಿ... ಹೀಗೆ ಎಲ್ಲ ಪ್ರಯೋಗಗಳನ್ನು ಮಾಡಿ ಮಕ್ಕಳ ಇಂಗ್ಲಿಷ್ ಒಂದು ಹಂತಕ್ಕೆ ಬಂತು. ವಿಷಯಗಳನ್ನು ಕಲಿತರು ಎಂಬ ಸಮಾದಾನ ನನ್ನದಾದರೂ ಮಾರನೇ ದಿನ ತರಗತಿಗೆ ಹೋದಾಗ‌ ಮಕ್ಕಳು "ಸರ್ರಿ, ಅದ ನಮಗ ಗೊತ್ತೈತ್ರಿ, ಮತ್ತೇನಾರ ಹೊಸಾದ ಕಾಂಪಿಟೇಶನ್ ಮಾಡ್ರಿ" ಅಂತ ಅಂದಾಗ ನನಗನಿಸಿದ್ದು, ನಾವು ಎಷ್ಟೆಲ್ಲಾ ಮಾಡಿದೆ ಎಂದುಕೊಂಡಾಗಲೂ ಮಕ್ಕಳಿಗೆ ಅದು ಬರೀ ಇಷ್ಟೇ ಅನ್ನೋ ಸತ್ಯ. ಮಕ್ಕಳು ನಿತ್ಯವೂ ಹೊಸತನವನ್ನು ಬಯಸುತ್ತಾರೆ, ನಿನ್ನೆಯದನ್ನು ಅವರಿಂದು ಒಪ್ಪುವುದಿಲ್ಲ, ಒಪ್ಪಿದರೂ ಇಷ್ಟದಿಂದಲ್ಲ, ಕಷ್ಟದಿಂದ ಎನ್ನುವುದು ಕೂಡ ಸ್ಪಷ್ಟ. ಹೀಗೆ ಹುಡುಕುತ್ತಾ, ನಿತ್ಯವೂ ಹೊಸತನ್ನು ಕೊಡುತ್ತಾ ಸಾಗಿದ್ದರ ಫಲವೇ ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳ . ಎಲ್ಲ ಶಿಕ್ಷಕರು ಜಾಲತಾಗಳಲ್ಲಿ ಹುಡುಕಾಡಿ ಹೊಸತನ್ನು ತರಲೇಬೇಕು. ಸರ್ರಿ ನಿನ್ನೆ ಆರನೇತ್ತೆದವರಿಗೆ ಮರಗಾಲ...

ಪ್ರಯತ್ನಿಸುವ ಮುನ್ನ ಪಲಿತಾಂಶದ ಆಲೋಚನೆ ಬೇಡ

Image
ಪ್ರಯತ್ನಿಸುವ ಮುನ್ನವೇ ಪಲಿತಾಂಶದ ಆಲೋಚನೆ ಮಾಡುತ್ತೇವಲ್ಲ, ಅದು ಪ್ರಯತ್ನದ ಮೇಲೆಯೇ ಪರಿಣಾಮವನ್ನುಂಟು ಮಾಡುತ್ತದೆ. ಪಲಿತಾಂಶವು ಪ್ರಯತ್ನದ ರೀತಿಯನ್ನು ಅವಲಂಬಿಸಿರುತ್ತದೆ. ಯಾವುದೇ ಕಾರ್ಯಗಳನ್ನು ಆರಂಭಿಸುವ ಮುನ್ನ ಈ ಜಾಗರೂಕತೆ ಇರಲೇಬೇಕು. ಇಲ್ಲದಿದ್ದರೆ ಕಾರ್ಯವನ್ನು ಆರಂಭಿಸುವ ಮುನ್ನವೇ ಹಾಗೆ, ಹೀಗೆ ಅಂತೆಲ್ಲಾ ಮಾತಾಡಿ ನಿಮ್ಮನ್ನು ಅಲ್ಲಿಯೇ ನಿಲ್ಲಿಸಿ ಬಿಡುವ ವಾತಾವರಣ ಸೃಷ್ಟಿಸಬಹುದು . ಸ್ಥಿರತೆಯೇ ಇಲ್ಲದ ಆಲೋಚನೆಗಳು, ವ್ಯಕ್ತಿತ್ವಗಳು ಈ ರೀತಿಯ ಪ್ರಯತ್ನಗಳನ್ನು ನಿಲ್ಲಿಸಿ ಬಿಡುತ್ತವೆ. ಮುಂದಿಡುವ ಹೆಜ್ಜೆಯನ್ನು ಇಡದಂತೆ, ಕ್ರಮಿಸಬೇಕಾದ ದಾರಿಯನ್ನು ‌ಕ್ರಮಿಸದಂತೆ. ಕೆಲಸ ಮಾಡಿಯೂ, ಈ ರೀತಿ ಮಾತನಾಡಿಸಿಕೊಳ್ಳಬೇಕಾ? ಎಂದು ಕಾರ್ಯವನ್ನು ಮಾಡಬೇಕಾದವರೂ ನೊಂದು ಸುಮ್ಮನಿರುವಂತೆ ಮಾಡಿ ಬಿಡುತ್ತಾರೆ.  ಶ್ರೇಷ್ಠ ಕಾರ್ಯಗಳನ್ನು‌ ಮಾಡಲು ಹೊರಟವರು ಇವುಗಳೆಲ್ಲವನ್ನೂ ಸಹಿಸಿಕೊಂಡು, ದಾಟಿಕೊಂಡು ಮತ್ತೂ ಸಾಗುವ ಛಲ ಹಾಗೂ ಮನಸ್ಥಿತಿಯನ್ನು ಹೊಂದಿರಲೇಬೇಕು. ಇಲ್ಲದಿದ್ದರೆ ಪ್ರಯತ್ನವನ್ನು ಆರಂಭಿಸುವ ಹಂತದಲ್ಲಿಯೇ ನಿಮ್ಮನ್ನು ನಿಲ್ಲಿಸಿ ಬಿಡುತ್ತಾರೆ. ಅಂದುಕೊಂಡ ಕಾರ್ಯ ಸಾದ್ಯವಾಗದಂತೆ, ಮತ್ತೆಂದೂ ಅಂತಹ ಕೆಲಸ ಮಾಡುವ ಆಲೋಚನೆಯೂ ನಿಮ್ಮ ಮನದಲ್ಲಿ‌ ಮೂಡದಂತೆ. ಹೀಗೆಲ್ಲವೂ ಆಗಬಹುದು ಎನ್ನುವ ಸತ್ಯವನ್ನು ಅರಿತು, ಹೊಗಳಿಕೆಗಳನ್ನು‌ ನಿರೀಕ್ಷಿಸದೇ, ತೆಗಳಿಕೆಗಳಿಗೆ ಕಿವಿಗೊಡದೇ ಹಾಗೂ ಪಲಿತಾಂಶದ ಬಗ್ಗೆ ಆಲೋಚಿಸದೇ ಮಾಡುವ ...

ಬದುಕಿದು ಒಂದು ಅವಕಾಶ

Image
ನಮಗೆ ಹೊಸತನ್ನು ಕಲಿಸುವ, ಶಕ್ತಿ‌ ನೀಡುವ, ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವವರ ಜೊತೆಗಿನ ಒಡನಾಟ, ಒಂದಿಷ್ಟು ಹರಟೆ, ವಾರಕ್ಕೊಂದು ಅರ್ಧ ಗಂಟೆಯ ಪೋನ್ ಮಾತು ಖಂಡಿತವಾಗಿಯೂ ನಮ್ಮನ್ನು ಬಹಳಷ್ಟು ಬದಲಿಸುತ್ತವೆ. ಅವನೇನು ಮಾಡಿದ? ಇವನೇನು ಮಾಡಿದ? ಎಂದು ಇತರರ ಕುರಿತಾದ ಚರ್ಚೆಯಲ್ಲಿಯೇ ಬದುಕಿನ ಅಮೂಲ್ಯ ದಿನಗಳನ್ನು ಸುಮ್ಮನೆ ಮುಗಿಸಿ ಬಿಡುವುದಕ್ಕಿಂತ (ಮುಗಿಸದಿದ್ದರೂ ಮುಗಿದು ಬಿಡುತ್ತವೆ) ನಮಗೆ ತೃಪ್ತಿ ನೀಡುವ ಕೆಲಸಗಳಿಗೆ ನಮಗೆ ಪ್ರೇರಣೆಯಾಗುವವರ ಹುಡುಕಿ ಸಾಗಬೇಕು. ಈ ವರ್ಷ ಅಂತಹ ಹಲವರನ್ನು ನನಗೆ ಪರಿಚಯಿಸಿತು. ಅವರೆಲ್ಲ ನನ್ನಂತಹ ಸಾವಿರಾರು ಜನರಿಗೆ ಪ್ರೇರಣೆಯಾದವರು, ನಮ್ಮಿಂದ ಏನೂ ಆಗುವುದಿಲ್ಲ‌ ಎನ್ನುವವರಿಂದಲೇ ಅದ್ಭುತ..!! ಎನ್ನುವಂತಹ ಕೆಲಸಗಳನ್ನು ‌ಮಾಡಿಸಿದವರು. ಏನೆಲ್ಲವನ್ನೂ ಮಾಡಿಯೂ ಏನೂ ಮಾಡದಂತೆ ಸುಮ್ಮನಿರುವವರು, ನಮ್ಮ ಸುತ್ತಮುತ್ತಲಿರುವವರು ನಮ್ಮ ಕೆಲಸಗಳನ್ನು, ಆಲೋಚನೆಗಳನ್ನು ‌ನಿರ್ಧರಿಸುವಲ್ಲಿ ನಮಗರಿವಿಲ್ಲದೇ ಪ್ರಭಾವಿಸಿರುತ್ತಾರೆ. ಪ್ರಭಾವಿಸುವವರು ಹಾಗೂ ಅವರ ಆಲೋಚನೆಗಳು ಸಕಾರಾತ್ಮಕವಾಗಿರುವವರ ನಡುವೆ ನಾವಿದ್ದರೆ ನಾವು ಹಾಗೂ ನಮ್ಮ ಆಲೋಚನೆಗಳು ಕೂಡ ಬಲಿಷ್ಯವಾಗಿರುತ್ತವೆ, ನ್ಯೂನತೆಗಳನ್ನು ಸರಿ ಪಡಿಸುವಷ್ಟು; ಸಮಸ್ಯೆಗಳನ್ನು ಪರಿಹರಿಸುವಷ್ಟು. ಬರೀ ಮಾತನಾಡುತ್ತಲೇ, ಇತರರ ತಪ್ಪುಗಳನ್ನು ಹುಡುಕುತ್ತಲೇ ಇರುವವರ ನಡುವಿದ್ದರೆ ನಾವೂ ಅವರಂತೆಯೇ ಅಂತಹ ಕೆಲಸಗಳನ್ನು ‌ಮಾಡಲು ಅಣಿಯಾಗುತ್ತೇವೆ,...